
15th October 2025
ಕುಷ್ಟಗಿ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ಇಂದು 15 ನೇ ದಿನಾಂಕ ಬುಧುವಾರ ಹಾಗೂ ನಾಳೆ 16 ನೇ ದಿನಾಂಕ ಗುರುವಾರದಂದು ಚಳಗೇರಾ ಹಿರೇಮಠದ ಲಿಂಗೈಕ್ಯ ಪರಮಪೂಜ್ಯ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ 11ನೇ ವರ್ಷದ
ಪುಣ್ಯಸ್ಮರಣೋತ್ಸವದ ಹಾಗೂ ಶ್ರೀ ಮಠದ ಉದ್ಘಾಟನೆಯು 16-10-2025 ಗುರುವಾರ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಕುಷ್ಟಗಿ ಪಟ್ಟಣದಲ್ಲಿ ನಮ್ಮ ವಾಹಿನಿಯೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ರಂಭಾಪುರಿ ಹಾಗೂ ಉಜ್ಜಯಿನಿ ಜಗದ್ಗುರುಗಳು,
ಹುಬ್ಬಳ್ಳಿ ಮೂರುಸಾವಿರಮಠ ಮತ್ತು ನೊಣವಿನಕೆರೆ
ಕಾಡಸಿದ್ದೇಶ್ವರಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಅನೇಕ
ಕಾರ್ಯಕ್ರಮಗಳು ನಡೆಯಲಿವೆ ಎಂದರು.
ನಾಳೆ 15 ನೇ ದಿನಾಂಕದಂದು ಶ್ರೀಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಹಾಗೂ ಧರ್ಮಸಭೆ ಸಮಾರಂಭ ಮತ್ತು ರುದ್ರಮುನಿ ದೇವರಿಂದ ಯೋಗ ಪ್ರದರ್ಶನ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಪ್ರಶಸ್ತಿ ಪುರಸ್ಕಾರ, ಗೌರವ ಸನ್ಮಾನ ಕಾರ್ಯಕ್ರಮ ಇರುತ್ತದೆ.
ನಾಡಿದ್ದು 16ರಂದು ಬೆಳಗ್ಗೆ ಮೂಲ ಕರ್ತೃ ಗದ್ದುಗೆಗೆ ಪೂಜಾ ಕಾರ್ಯಕ್ರಮಗಳು, ಅಡ್ಡಪಲ್ಲಕ್ಕಿ
ಮಹೋತ್ಸವ ಚಳಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠ ತಲುಪಿದ ನಂತರ ನೂತನ ಶ್ರೀಮಠದ ಉದ್ಘಾಟನೆ ಹಾಗೂ ರೇಣುಕಾಚಾರ್ಯರ ಮಂಗಲಮೂರ್ತಿಗೆ
ಸ್ವರ್ಣಕಿರೀಟ ಧಾರಣೆ ನಡೆಯುತ್ತದೆ. ಈ ಸ್ವರ್ಣ ಕಿರೀಟ ಸೇವೆಯನ್ನು ಶ್ರೀಮತಿ ಸುನಿತಾ ಡಾಕ್ಟರ್ ಅಂದಾನಯ್ಯ ಶ್ಯಾಡ್ಲಗೇರಿ ಹಿರೇಮಠ ಮತ್ತು ಪರಿವಾರ ಸಾಕಿನ್ ಮುಧೋಳ ಇವರು ಮಾಡಲಿದ್ದಾರೆ.
ನಂತರ ಉಚಿತ ಆರೋಗ್ಯ ಶಿಬಿರ, ಧರ್ಮಸಭೆ ಉದ್ಘಾಟನೆ ನಡೆಯಲಿದೆ. ಸಂಜೆ ರಥೋತ್ಸವ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಡಾಕ್ಟರ್ ಪ್ರಸನ್ನರೇಣುಕ ವೀರಸೋಮೆಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದಂಗಳವರು, ವೀರಸಿಂಹಾಸನ ಮಹಾಸಂಸ್ಥಾನಪೀಠ ಬಾಳೆಹೊನ್ನೂರು, ಹಾಗೂ
ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಮಹಾಭಗವತ್ಪಾದಂಗಳವರು, ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನಪೀಠ ಉಜ್ಜಯಿನಿ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮುಕ್ತಿಮಂದಿರ ವಹಿಸಲಿದ್ದಾರೆ.
ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು, ಡಾಕ್ಟರ್ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು, ಪ್ರಭುಸಾರಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಡಾಕ್ಟರ್ ಶರಣಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಮತ್ತು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ಸಂಸದರಾದ ರಾಜಶೇಖರ ಹಿಟ್ನಾಳ್, ಶಾಸಕರಾದ ದೊಡ್ಡನಗೌಡ ಎಚ್. ಪಾಟೀಲ, ವಿಜಯಾನಂದ ಕಾಶಪ್ಪನವರು, ಮಹೇಶ ಟೆಂಗಿನಕಾಯಿ, ಎಸ್.ಎಲ್.
ಭೋಜೇಗೌಡರು, ಹೇಮಲತಾ ನಾಯಕ್, ಶರಣಗೌಡ ಬಯ್ಯಾಪುರ, ಅಮರೇಗೌಡ ಪಾಟೀಲ್ ಬಯ್ಯಾಪುರ, ಸಂಗಣ್ಣ ಕರಡಿ, ಕೆ. ಶರಣಪ್ಪ ವಕೀಲರು, ಹಸನಸಾಬ್ ದೋಟಿಹಾಳ್, ಪರಣ್ಣ ಮುನವಳ್ಳಿ, ದೊಡ್ಡನಗೌಡ ಪಾಟೀಲ್ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಲಘು ರಥೋತ್ಸವ ನಡೆದ ನಂತರ ಮದ್ದು ಸಿಡಿಸುವ ಕಾರ್ಯಕ್ರಮ ಇರುತ್ತದೆ ಎಂದು ಹೇಳಿದರು.
ರೈತ ನಾಯಕರಾದ ಡಾಕ್ಟರ್ ದೇವೇಂದ್ರಪ್ಪ ಬಳೂಟಗಿ ಅವರು ಮಾತನಾಡಿ, ನಾನು ಕೂಡಾ ಶ್ರೀ ಮಠದ ಹಳೆಯ ವಿದ್ಯಾರ್ಥಿಯಾಗಿದ್ದು ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷದಾಯಕ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರುದ್ರಮುನಿ ದೇವರು ಹಾಗೂ ಇತರರು ಉಪಸ್ಥಿತರಿದ್ದರು.
ಶ್ರೀ ವಿರುಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ರಥ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಈ ಕಾರ್ಯಕ್ಕೆ ಕಾಣಿಕೆ ಸಲ್ಲಿಸುವವರು, ಶ್ರೀ ರುದ್ರಮುನಿ ಶಿವಾಚಾರ್ಯ ವಿದ್ಯಾವರ್ಧಕ ಸಂಸ್ಥೆ ಸೋಲ್ ಟ್ರಸ್ಟ್ ಚಳಗೇರಾ. ಅಕೌಂಟ್ ನಂಬರ್. 10085714525.
IFSC ಕೋಡ್. 1DFB0080353.
ಬ್ರಾಂಚ್ ಕುಷ್ಟಗಿ ಕಳುಹಿಸಬೇಕೆಂದು ತಿಳಿಸಲಾಗಿದೆ.
ಗೂಗಲ್ ಪೇ ಫೋನ್ ಪೇ ಮತ್ತು ಪೇಟಿಎಂ ಮುಖಾಂತರ ದೇಣಿಗೆ ಸಲ್ಲಿಸುವವರು, 9071126655
ಈ ನಂಬರಿಗೆ ಕಳುಹಿಸಬೇಕೆಂದು ಶ್ರೀ ಮಠದಿಂದ ತಿಳಿಸಲಾಗಿದೆ.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ - ಸುದ್ದಿಗಳಿಗಾಗಿ ಸಂಪರ್ಕಿಸಿರಿ. 9482935606 ಮತ್ತು 8660935572.
ಧನ್ಯವಾದಗಳು.
ಶ್ರೀ ವಿರುಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ರಥ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಈ ಕಾರ್ಯಕ್ಕೆ ಕಾಣಿಕೆ ಸಲ್ಲಿಸುವವರು, ಶ್ರೀ ರುದ್ರಮುನಿ ಶಿವಾಚಾರ್ಯ ವಿದ್ಯಾವರ್ಧಕ ಸಂಸ್ಥೆ ಸೋಲ್ ಟ್ರಸ್ಟ್ ಚಳಗೇರಾ. ಅಕೌಂಟ್ ನಂಬರ್. 10085714525.
IFSC ಕೋಡ್. 1DFB0080353.
ಬ್ರಾಂಚ್ ಕುಷ್ಟಗಿ ಕಳುಹಿಸಬೇಕೆಂದು ತಿಳಿಸಲಾಗಿದೆ.
ಗೂಗಲ್ ಪೇ ಫೋನ್ ಪೇ ಮತ್ತು ಪೇಟಿಎಂ ಮುಖಾಂತರ ದೇಣಿಗೆ ಸಲ್ಲಿಸುವವರು, 9071126655
ಈ ನಂಬರಿಗೆ ಕಳುಹಿಸಬೇಕೆಂದು ಶ್ರೀ ಮಠದಿಂದ ತಿಳಿಸಲಾಗಿದೆ.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ 3ನೇ ದಿನದಂದು ಬೆಟ್ಟದಲ್ಲಿ ಸತತ 24 ತಾಸು ಭಜನೆ
ಹಿರೇಮನ್ನಾಪೂರ ಗ್ರಾಮದಲ್ಲಿ ಗುರುವಾರ ಎರಡನೇ ದಿನದ ಪುರಾಣ ಕಾರ್ಯಕ್ರಮ ಉದ್ಘಾಟನೆ
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಕುರಿತು ಕುಷ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ